ಮಂಗಳೂರು ನಗರ ಪ್ರಾಧಿಕಾರ (ಮೂಡ) ಇಲ್ಲಿನ ಜೆಇ (ಇಂಜಿನಿಯರ್) ಕೊಣಾಜೆ ಸುರತ್ಕಲ್ ಇಲ್ಲಿನ ಅಭಿವೃದ್ಧಿ ಯ ಮಣ್ಣನ್ನು ಕಬಳಿಸಿ ಬಿಜಾಪುರದಲ್ಲಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಕಟ್ಟಲು ಹೊರಟಿರುವ ಜೆಇ (ಇಂಜಿನಿಯರ್) ಕಳೆದ ಹಲವಾರು ವರ್ಷಗಳ ಹಿಂದೆ ಮೂಡ ದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇಲ್ಲಿನ ಭ್ರಷ್ಟಾಚಾರ ಹೆಚ್ಚಾಗಿರುವ ಕಾರಣ ಅವಾಗಿನ ಶಾಸಕರಾದ ಭರತ್ ಶೆಟ್ಟಿಯವರು ಎತ್ತಂಗಡಿ ಮಾಡಲಾಗಿತ್ತು.
ಇದೀಗ ಪ್ರಭಾವಿ ರಾಜಕಾರಣಿಗಳ ಪ್ರಭಾವದಿಂದ ಮತ್ತೆ ಮೂಡದಲ್ಲೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆಂದು ಮೀಸಲಿಟ್ಟ ಹಣವನ್ನು ಬಿಜಾಪುರ ದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬಳಕೆ ಮಾಡಲಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತದೆ. ಸರಕಾರದ ಸೌಲಭ್ಯ ಪಡೆದು ತನ್ನ ವೃತ್ತಿಗೆ ಮೋಸ ಮಾಡುತ್ತಿರುವ ಇಂತಹ ಸರಕಾರಿ ಅಧಿಕಾರಿಗಳನ್ನು ಎತ್ತಂಗಡಿ ಮಾಡುವುದಕ್ಕೆ ಮಾತ್ರವಲ್ಲ ಬದಲಾಗಿ ಅಧಿಕಾರ ದಿಂದ ಕಿತ್ತೆಸೆಯ ಬೇಕೆಂದು ಜನರು ತಮ್ಮ ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ.
