ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ( ಮೂಡ) ಮತ್ತು ಮಹಾನಗರ ಪಾಲಿಕೆ, RTO ಕಛೇರಿ ಹಾಗೂ ಆಡಳಿತ ಸೌಧ (ಮಿನಿ ವಿಧಾನ ಸೌಧ) ಸಬ್ ರಿಜಿಸ್ಟಾರ್ ಕಚೇರಿ ಸೇರಿದಂತೆ ಇತರೆ ಇಲಾಖೆಯಲ್ಲಿ ಬ್ರೋಕರ್ ಗಳ ಕಾರುಬಾರೆ ಜಾಸ್ತಿ, ದಲ್ಲಾಳಿಗಳು ಇಲ್ಲದೇ ಇಲ್ಲಿ ಯಾವುದೇ ಕೆಲಸ ನಡೆಯೊದಿಲ್ಲ. ಅಧಿಕಾರಿಗಳ ಮತ್ತು ದಲ್ಲಾಲಿಗಳ ನಡುವೆ ಹಣದ ರೂಪದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ.
ಈ ದಲ್ಲಾಳಿಗಳ ಹಾವಲಿಯಿಂದ ನಕಲಿ ಸಿಂಗಲ್ ಸೈಟ್, ಮಹಾನಗರ ಪಾಲಿಕೆಯಲ್ಲಿ ನಕಲಿ ಉದ್ಯಮ ಪರವಾನಿಗೆ ಪತ್ರ ಸೇರಿದಂತೆ ಬೇರೆ ಬೇರೆ ಇಲಾಖೆಯಲ್ಲಿ ನಿಯಮ ಬಾಹಿರ ಅತಿಹೆಚ್ಚು ವ್ಯವಹಾರ ದಲ್ಲಾಳಿ ಮತ್ತು ಅಧಿಕಾರಿಗಳ ನಡುವೆ ಲಂಚ ದಿಂದ ನಡೆಯುತ್ತಿದೆ.
ಈ ಹಿಂದೆ ಹಲವಾರು ಬಾರಿ ಲೋಕಯುಕ್ತ ದಾಳಿ ನಡೆದಿದೆ. ಆ ಅವದಿಯಲ್ಲಿ ಸ್ವಲ್ಪ ಮಟ್ಟಿಗೆ ಈ ದಲ್ಲಾಳಿಗಳ ಹಾವಳಿ ಕಡಿಮೆಯಾಗಿತ್ತು.
ಆ ಬಳಿಕ ಲೋಕಯುಕ್ತ ದಾಳಿ ಕಡಿಮೆಯಾಗಲು ಸಂಶಯಕ್ಕೆ ಕಾರಣವಾಗಿದೆ.
ಅನೇಕ ಇಲಾಖೆಗೆ ಲೋಕಯುಕ್ತ ದಾಳಿ ನಡೆಸಿದರೆ ಈ ಲಂಚ ಮತ್ತು ದಲ್ಲಾಳಿಗಳ ಹಾವಳಿ ಕಡಿಮೆಯಾಗಬಹುದು.
ಈ ವ್ಯವಸ್ಥೆಯಿಂದ ಸಾಮಾನ್ಯ ಜನರ ಕೆಲಸಗಳು ಮೂಲೆಗುಂಪುಯಾಗಿವೆ. ಕಂತೆ ಕಂತೆ ಹಣ ನೀಡುವವರ ಪೈಲ್ ಗಳು ಅತೀ ವೇಗವಾಗಿ ಮುಂದುವರಿದು ಆ ಕೆಲಸಗಳು ತಕ್ಷಣ ಮಾತ್ರವಲ್ಲಿ ನಡೆಯುತ್ತದೆ. ಇದರಿಂದಾಗಿ ಸಾಮಾನ್ಯ ಜನರು ಕಛೇರಿ, ಪಾಲಿಕೆ ಹೀಗೆ ಸುತ್ತಾಡುವುದೆ ಆಗಿದೆ. ಲೋಕಯುಕ್ತ ಅಧಿಕಾರಿಗಳು ತಿಂಗಳಿಗೊಮ್ಮೆ ದಾಳಿ ನಡೆಸಿದರೇ ಮತ್ತೆ ಎಲ್ಲಾ ವ್ಯವಸ್ಥೆ ಸರಿಯಾಗುವ ಲಕ್ಷಣಗಳಲಿವೆ.
