ಮಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ತೆರವು ಕಾರ್ಯಾಚರಣೆ ರಭಸವಾಗಿ ನಡೆಯುತ್ತಿದೆ. ರಸ್ತೆ ಬದಿ ವ್ಯಾಪಾರದಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಇದೇ ವೇಳೆ ಸಾರ್ವಜನಿಕರಲ್ಲಿ ಒಂದು ಪ್ರಶ್ನೆ ಮೂಡಿದೆ.
ರಾಜಕಾಲುವೆ ಒತ್ತುವರಿ ಮಾಡಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿರುವವರ ವಿರುದ್ಧ ಕ್ರಮ ಯಾವಾಗ?
ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಕಾನೂನು ಅನ್ವಯವಾಗುತ್ತದೆಯೇ?
ರಾಜಕಾಲುವೆ ಒತ್ತುವರಿ ಮಾಡಿ ಬೃಹತ್ ಕಟ್ಟಡ ನಿರ್ಮಾಣ ಮಾಡಿರುವವರಿಗೂ ಇದೇ ಕಾನೂನು ಅನ್ವಯವಾಗುವುದಿಲ್ಲವೇ?
ನಗರದ ಹಲವೆಡೆ ರಾಜಕಾಲುವೆ ಒತ್ತುವರಿಯಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ಮಳೆಗಾಲದಲ್ಲಿ ನೀರು ರಸ್ತೆಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಾಜ ಕಾಲುವೆ ಒತ್ತುವರಿ. ಪಂಪ್ ವೆಲ್ ನಿಂದ ಬಂದಾರು ತನಕ ನಗರದ ಹಲವೆಡೆ ದೊಡ್ಡ ದೊಡ್ಡ ರಾಜ ಕಾಲುವೆಯನ್ನೇ ನುಂಗಿ ಕಟ್ಟಡ ನಿರ್ಮಿಸಿ ಮಂಗಳೂರಿನ ಸೌಂದರ್ಯವನ್ನೆ ಹಾಳುಮಾಡಿ. ನಿತ್ಯ ಮಳೆಗಾಲದಲ್ಲಿ ಸಮಸ್ಯೆಯ ಸಾಗರವನ್ನೆ ಮಾಡಿದ ಬಿಲ್ಡರ್ ಗಳಿಗೆ ಯಾವುದೇ ಸರಕಾರ ಮತ್ತು ಎಷ್ಟೇ ಮಹಾನಗರ ಪಾಲಿಕೆಯ ಆಯುಕ್ತರು ಬದಲಾದರೂ ಇದುವರೆಗೆ ಕ್ರಮ ಕೈಗೊಳ್ಳಲಾದೆ ಇರುವುದು ವಿಪರ್ಯಾಸವೇ ಸರಿ. ಇಲ್ಲಿನ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಧರ್ಪ ಕೇವಲ ದುಡಿದು ತಿನ್ನುವ ಬಡವನ ಮೇಲೆ ಸೀಮಿತವಾಗಿದೆ.
ನಗರವನ್ನೆ ನುಂಗಿ ಐಶಾರಾಮಿ ಜೀವನ ನಡೆಸುವ ಅನೇಕ ಬಿಲ್ಡರ್ ಗಳಿಗೆ ಇದುವರೆಗೆ ಒಂದು ನೋಟಿಸು ನೀಡದ ಮ.ನ.ಪಾ ಅಧಿಕಾರಿಗಳ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಮಾತ್ರ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆಯೇ?
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದವರಿಗೂ ಇದೇ ಕಾನೂನು ಅನ್ವಯವಾಗಬೇಕಲ್ಲವೇ?
ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆಲ್ಲ ಉತ್ತರ ನೀಡಬೇಕಿದೆ.















