,

ಸಂಪತ್ ಕುಮಾರ್ ಶೆಟ್ಟಿಯ ಭಂಡ ಧೈರ್ಯಕ್ಕೆ ಕೊನೆ ಎಂದೂ.?? ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಾಣ ವಿರುದ್ಧ ಧ್ವನಿ ಎತ್ತುವವರಿಗೆ ಮಾನಹಾನಿ ನೋಟಿಸ್ ಸರಿಯೇ..!?

ಕುರುಡು ಕಾಂಚಾಣ ಕುಣಿಯುತ್ತಲಿತು ಕಾಲಿಗೆ ಬಿದ್ದವರ ತುಳಿಯುತ್ತಲಿತೋ ಎಂಬ ಗಾದೆ ಮಾತು ಈ ಸಂಪತ್ ಕುಮಾರ್ ಶೆಟ್ಟಿಗೆ ಸರಿಯಾಗಿ ಅನ್ವಯಿಸುತ್ತದೆ. ಯಾಕೆಂದರೆ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಾಣದ ಕುರಿತು ಮಾನ್ಯ ನ್ಯಾಯಾಲಯದ ಆದೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪೋಲಿಸರು ನೋಟಿಸ್ ಮೇಲೆ ನೋಟಿಸ್ ಕಳಿಸಿದರು ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವ ಸಂಪತ್ ಕುಮಾರ್ ಶೆಟ್ಟಿಗೆ ಪೋಲಿಸರು ತಮ್ಮ ಲಾಟಿ ರುಚಿ ತೋರಿಸುವುದೇ ಉತ್ತಮ ಎಂಬುವಂತಾಗಿದೆ. ಅಕ್ರಮ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಮಾನ…

ಕುರುಡು ಕಾಂಚಾಣ ಕುಣಿಯುತ್ತಲಿತು ಕಾಲಿಗೆ ಬಿದ್ದವರ ತುಳಿಯುತ್ತಲಿತೋ ಎಂಬ ಗಾದೆ ಮಾತು ಈ ಸಂಪತ್ ಕುಮಾರ್ ಶೆಟ್ಟಿಗೆ ಸರಿಯಾಗಿ ಅನ್ವಯಿಸುತ್ತದೆ. ಯಾಕೆಂದರೆ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಾಣದ ಕುರಿತು ಮಾನ್ಯ ನ್ಯಾಯಾಲಯದ ಆದೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪೋಲಿಸರು ನೋಟಿಸ್ ಮೇಲೆ ನೋಟಿಸ್ ಕಳಿಸಿದರು ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವ ಸಂಪತ್ ಕುಮಾರ್ ಶೆಟ್ಟಿಗೆ ಪೋಲಿಸರು ತಮ್ಮ ಲಾಟಿ ರುಚಿ ತೋರಿಸುವುದೇ ಉತ್ತಮ ಎಂಬುವಂತಾಗಿದೆ. ಅಕ್ರಮ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಮಾನ ಹಾನಿ ನೋಟಿಸ್ ಕಳಿಸುವ ಭೂಪ ತಾನು ಮಾಡಿದ್ದೆ ಸರಿ ಅನ್ನೂ ಮನೋಭಾವ ಇದೆ.

ಈ ಅಕ್ರಮ ಬಗ್ಗೆ ನಮ್ಮ ವಾಹಿನಿಯಲ್ಲಿ ಇದು ನಾಲ್ಕನೇ ವರದಿ, ಹೀಗೆ ಸರಕಾರದ ಅಧಿಕಾರಿಗಳ ನೋಟಿಸ್, ಕೋರ್ಟ್ ನೋಟೀಸ್ ಗೂ ಬಾಗ್ಗದ ಇವನ ಯಾವ ಬಂಡ ಧೈರ್ಯ ಇರಬಹುದು??

ವರದಿಯ ಹಿನ್ನಲೆ:

ಉಡುಪಿ ಜಿಲ್ಲೆಯ ಕೆಮ್ಮಣ್ಣು ಪಡು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಸರೋವರ ಬಾರ್ & ರೆಸ್ಟೋರೆಂಟ್ ವಾಣಿಜ್ಯ ಕಟ್ಟಡದ ಕಾಮಗಾರಿ ಕಟ್ಟಡ ಮಾಲೀಕ ಸಂಪತ್‌ ಕುಮಾರ್ ಶೆಟ್ಟಿ ಎಂಬಾತನು ಕಟ್ಟಡ ಪರವಾನಿಗೆಯನ್ನು ಪಡೆಯದೇ ರಾಜರೋಷವಾಗಿ ಅಕ್ರಮ ಕಟ್ಟಡದ ನಿರ್ಮಾಣಕ್ಕೆ ಸುಮಾರು ಮೂವತ್ತು ಕಾರ್ಮಿಕರನ್ನು ಸೇರಿಸಿ ರಾತ್ರಿ ಹಗಲು ಕಟ್ಟಡದ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ತಹಶೀಲ್ದಾರ, ಚೀಫ್‌ ಆಫೀಸರಿ, ನಗರಾಭಿವೃದ್ಧಿ ಇಲಾಖೆ ಉಡುಪಿ, ತಾಲೂಕು ಪಂಚಾಯತ್‌ ಕಾರ್ಯನಿರ್ವವಹಣಾಧಿಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಭಕಾರಿ ಇಲಾಖೆ, ಗ್ರಾಮ ಪಂಚಾಯತ್ ಅಭಿವೃದ್ದೀ ಅಧಿಕಾರಿ, ಸೇರಿದಂತೆ ವಿವಿಧ ಇಳಾಖೆಗೆ ದೂರು ಅರ್ಜಿ ನೀಡಿದ್ದರೂ ಕ್ಯಾರೆ ಎನ್ನದ ಕಟ್ಟಡ ಮಾಲೀಕ ಹಳೇ ಕಟ್ಟಡವನ್ನು ಕೆಡವಿ ಹೊಸತಾಗಿ ಕಬ್ಬಿಣದ ರಾಡ್‌ ಹಾಕಿ ಯಾವುದೇ ನಿಯಮಗಳನ್ನು ಪಾಲೀಸದೇ ಅನದಿಕೃತ ಕಟ್ಟಡವನ್ನು ಕಟ್ಟುತ್ತಿದ್ದಾರೆ.

ಅಕ್ರಮ ಕಟ್ಟಡ ನಿರ್ಮಾಣಕ್ಕೆ ನೇರವಾಗಿ ಮುಖ್ಯಮಂತ್ರಿಯ ಬೆಂಬಲ ಎದ್ದುಕಾಣುತ್ತದೆ. ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಚೇರಿಯಿಂದ ಕರೆ ಬಂದಿದೆ ಎಂದು ಮೂಲಗಳಿಂದ ಮಾಹಿತಿ ಇದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಸಂಪತ್ ಕುಮಾರ್ ಶೆಟ್ಟಿಗೆ ಹೈ ಲೆವೆಲ್ ಇಂಪ್ಲೆನ್ಸ್ ಇರುವುದರಿಂದ ಕಾನೂನಿನ ಕೈ ಕಟ್ಟಿ ಹಾಕಿದೆ.

ಪಂಚಾಯತ್‌ ಪಿಡಿಓ ನಾಮಕಾವಸ್ಥೆಗೆ ಕಟ್ಟಡ ಮಾಲೀಕನಿಗೆ ದಿನಾಂಕವನ್ನು ನಮೂದಿಸದೇ ನೋಟೀಸು ನೀಡಿದ್ದು ಪಂಚಾಯತ್‌ ಪಿಡಿಓ ಗೆ ಯಾರದೋ ರಾಜಕೀಯ ಒತ್ತಡವಿರುವುದು ಇಲ್ಲಿ ಸ್ಪಸ್ಠವಾಗಿ ಗಮನಿಸಬಹುದಾಗಿದೆ. ಅಷ್ಟೇ ಅಲ್ಲದೆ ಕಟ್ಟಡ ಮಾಲೀಕನು ಸರಕಾರದ ಭಯವಿಲ್ಲದೆ, ಕೋರ್ಟ್‌ ಅದೇಶವನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಕಟ್ಟಡ ನಿರ್ಮಾಣದ ಬೂಪನ ಹಿಂದೆ ನೇರವಾಗಿ ಮುಖ್ಯಮಂತ್ರಿಯ ಬೆಂಬಲ ಇದೆಯಾ ಎಂದು ಪ್ರಶ್ನೆ ಎದರಾಗತ್ತಿವೆ ಮತ್ತು ಕೆಲವೊಂದಿಷ್ಟು ರಾಜಕಾರಣೀಗಳು ಭಾಗಿಯಾಗಿದ್ದಾರಾ ಎಂದು ಸಾರ್ವಜನಿಕ ವಲಯದಲ್ಲಿ ಬಾರೀ ಮಾತು ಕೇಳಿ ಬರುತ್ತಿದೆ.

ಅಕ್ರಮ ಕಟ್ಟಡ ನಿರ್ಮಾಣಕ್ಕೆ ನಮ್ಮ ಜನ ಪ್ರತಿನಿಧಿಗಳು ಬೆಂಬಲ ನೀಡುತ್ತಾರೆ ಎಂದರೆ ಏನು ಅರ್ಥ..?? ಎಷ್ಟೋ ಬಾರಿ ನೋಟಿಸ್ , ಅಧಿಕಾರಿಗಳು ಬಂದು ಕಾಮಗಾರಿ ನಿಲ್ಲಿಸಿ ಎಂದರು, ತಕ್ಷಣವೇ ಅದರ ಹತ್ತು ಪಟ್ಟು ರಾತ್ರಿ ಹಗಳು ವೇಗವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಕಟ್ಟಡ ಮಾಲೀಕನಿಗೆ ಕಾನೂನಿನ ಬಗ್ಗೆ ಒಂದು ಚೂರು ಭಯವೇ ಇಲ್ಲವಾಗಿದೆ. ಇವನ ಈ ಅಕ್ರಮಕ್ಕೆ ಅಧಿಕಾರಿಗಳು ತಕ್ಷಣವೇ ಬಲವಾದ ಕಡಿವಾಣ ಹಾಕಬೇಕಿದೆ‌.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed