Category: ಕ್ರೈಂ ಸುದ್ದಿ
Your blog category
-

ಸಿನಿಮೀಯ ಚೇಸ್: ಅರಣ್ಯ ಇಲಾಖೆಯ ವಾಹನ ಕದ್ದ ಯುವಕನ ಬಂಧನ
ಮಂಗಳೂರು : ಪಡೀಲ್ನಲ್ಲಿರುವ ಅರಣ್ಯ ಇಲಾಖೆಯ ವಸತಿಗೃಹದ ಬಳಿ ನಿಲ್ಲಿಸಲಾಗಿದ್ದ ಆರಣ್ಯ ಇಲಾಖೆಯ ಅಧಿಕೃತ ವಾಹನವನ್ನೇ ಕದ್ದು ಪರಾರಿಯಾಗಿದ್ದ ಕೇರಳ ಮೂಲದ ಖದೀಮನನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇವಲ ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಕೇರಳದ ಕೋಯಿಕ್ಕೋಡ್ ನಿವಾಸಿ ನದೀಮ್ (23) ಬಂಧಿತ ಆರೋಪಿಯಾಗಿದ್ದಾನೆ.ಮಂಗಳೂರು ಪಡೀಲ್ನ ಅರಣ್ಯ ಇಲಾಖೆಯ ವಸತಿ ಗೃಹದ ಆವರಣದಲ್ಲಿ ಸಂಚಾರಿ ದಳದ ಆರ್ಎಫ್ಒ (RFO) ಸಂತೋಷ್ ರೈ ಅವರಿಗೆ ಸೇರಿದ ವಾಹನವನ್ನು ಚಾಲಕ ಸೋಮವಾರ…
-

ಬೆಳ್ತಂಗಡಿಯಲ್ಲಿ ಸಂಚಲನ ಮೂಡಿಸಿದ್ದ ಕೊಲೆ ಪ್ರಕರಣ; ಆರೋಪಿಗಳಿಗೆ ನ್ಯಾಯಾಂಗ ಬಂಧನ
ಬೆಳ್ತಂಗಡಿ: ಗುರುವಾಯನಕೆರೆಯ ಅಲಾದಿ ಕೊಟ್ಟಿಗೆಯಲ್ಲಿ ಸೋಮವಾರ ನಡೆದಿದ್ದ ಯತೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಆರೋಪಿಗಳಾದ ಬೆಳ್ತಂಗಡಿಯ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬದ ಚಾರ್ವಾಕ ನಿವಾಸಿ ಮೋಹನ್ (30) ಮತ್ತು ಬೆಳ್ತಂಗಡಿಯ ಪಡಂಗಡಿ ನಿವಾಸಿ ಇಬ್ರಾಹಿಂ (54) ಎಂಬುವವರನ್ನು ಮಂಗಳವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.ಆರೋಪಿಗಳು ಯತೀಶ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಯತೀಶ್ ಗೌಡ ಅವರ…
-

ರೈಲಿನಲ್ಲಿ ರೌಡಿಸಂ! ಸಹ ಪ್ರಯಾಣಿಕನ ಮೇಲೆ ಹಲ್ಲೆ, ಬಂಟ್ವಾಳದಲ್ಲಿ RPF ಕಾರ್ಯಾಚರಣೆ
ಕಡಬ:ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿ, ಗಲಾಟೆ ಎಬ್ಬಿಸಿದ್ದ ಮೂವರು ವ್ಯಕ್ತಿಗಳನ್ನು ಬಂಟ್ವಾಳ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 56626ರ ಕೊನೆಯ ಬೋಗಿಯಲ್ಲಿ ಈ ಘಟನೆ ನಡೆದಿದೆ. ಕೋಡಿಂಬಾಳ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದ ಮೂವರು ವ್ಯಕ್ತಿಗಳು, ಚಲಿಸುವ ರೈಲಿನಲ್ಲಿ ಸಹ ಪ್ರಯಾಣಿಕರೊಬ್ಬರ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬೋಗಿಯಲ್ಲಿದ್ದ ಇತರ ಪ್ರಯಾಣಿಕರು…
-

‘ಯಾರದ್ದೋ ಪಾಸ್ಪೋರ್ಟ್, ಯಾರದ್ದೋ ಪ್ರಯಾಣ’ : ಉಳ್ಳಾಲದಲ್ಲಿ ನಡೆದಿರುವ ಭಾರಿ ಹಗರಣದ ಸತ್ಯ ಹೊರಬರುವುದು ಯಾವಾಗ?
ಮಂಗಳೂರು: ಬೇರೊಬ್ಬರ ದಾಖಲೆಗಳನ್ನು ಬಳಸಿ ನಕಲಿ ಪಾಸ್ಪೋರ್ಟ್ ಸೃಷ್ಟಿಸಿ ಇಸ್ರೇಲ್ಗೆ ತೆರಳಿದ ಪ್ರಕರಣವನ್ನು ಮಂಗಳೂರು ಸಿ.ಎಸ್.ಬಿ. ಪೊಲೀಸರು ಪತ್ತೆಹಚ್ಚಿರುವುದು ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಿದೆ. ಆದರೆ ಈ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಹಲವು ಗಂಭೀರ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಉಳ್ಳಾಲದ ಮಹಿಳೆಯೊಬ್ಬರ ಹೆಸರಿನ ದಾಖಲೆಗಳನ್ನು ಬಳಸಿ ಮತ್ತೋರ್ವ ಮಹಿಳೆಗೆ ಪಾಸ್ಪೋರ್ಟ್ ಮಾಡಿಕೊಡಲಾಗಿದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಆದರೆ ಈ ಪ್ರಕರಣ ಕೇವಲ ಒಂದು ಘಟನೆಯೇ, ಅಥವಾ ವರ್ಷಗಳಿಂದ ನಡೆಯುತ್ತಿರುವ ದೊಡ್ಡ…
-

ಸಾಕ್ಷಿಯ ಬಾಯಿ ಮುಚ್ಚಿಸಲು ಯತ್ನನಾ? ತ್ವಿಶಾ ಶರ್ಮಾ ಕೇಸ್ನ ಪ್ರಮುಖ ಸಾಕ್ಷಿ ಮೇಲೆ ದಾಳಿ
ಭೋಪಾಲ್: ನಟಿ ತ್ವಿಶಾ ಶರ್ಮಾ ಪ್ರಕರಣದ ಪ್ರಮುಖ ಸಾಕ್ಷಿಯ ಮೇಲೆ ಭೋಪಾಲ್ನಲ್ಲಿ ಆರೋಪಿ ಪತಿ ಸಮರ್ಥ್ ಸಿಂಗ್ನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಸಮರ್ಥ್ ಸಿಂಗ್ ಮನೆ ಬಳಿ ಸಲೂನ್ ನಡೆಸುತ್ತಿರುವ ನೀರಜ್ ದುಬೆ ಅವರ ಮೇಲೆ ಮೇ 30 ರಂದು ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಇನ್ನು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ನೀರಜ್ ದುಬೆ ಅವರ ಸುತ್ತ…
-

ರಸ್ತೆ ಕಾಮಗಾರಿ ನಡುವೆಯೇ ಅಕ್ರಮ ಮದ್ಯ ಸಾಗಾಟ; ಗುಂಡಿಗೆ ಬಿದ್ದ ಕಾರು, ಚಾಲಕ ಪೊಲೀಸ್ ವಶಕ್ಕೆ
ಉಪ್ಪಳ ದಲ್ಲಿ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಕರ್ನಾಟಕ ಮದ್ಯ ತುಂಬಿದ ಕಾರು ಒಂದು ಗುಂಡಿಗೆ ಬಿದ್ದಿದ್ದು ಸರಿ ಸುಮಾರು 30 ಬಾಕ್ಸ್ ಕರ್ನಾಟಕ ಮದ್ಯ ಕಾರಿನಲ್ಲಿ ಬಚ್ಚಿಡಲಾದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.ನಿನ್ನೆ ರಾತ್ರಿ 9.20 ರ ಸಮಯದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ರಸ್ತೆಯನ್ನು ಒಂದು ತಿಂಗಳು ಮುಚ್ಚಲಾಗಿತ್ತು. ಈ ವೇಳೆ “ನೋ ಎಂಟ್ರಿ” ಬೋರ್ಡ್ ಅಳವಡಿಸಲಾಗಿತ್ತು. ಇದನ್ನು ಮೀರಿ ಮದ್ಯ ತುಂಬಿದ ಕಾರು ಈ ರಸ್ತೆ ಯಲ್ಲಿ ಸಾಗಿದೆ. ಉಪ್ಪಳ ಗೇಟ್ ಬಳಿ ಅಪಘಾತ ಸಂಭವಿಸಿದೆ. ಊರಿನವರ…
-

ನೃತ್ಯದ ಉತ್ಸಾಹದಲ್ಲಿ ಹಾವು ಕಡಿತವನ್ನು ನಿರ್ಲಕ್ಷಿಸಿದ ಬಾಲಕಿ; ಕೊನೆಗೆ ಜೀವವೇ ಬಲಿ
ಆರೂರ್ (ಕೇರಳ): ಜೂನ್ 1ರ ಸೋಮವಾರದಂದು ಹೊಸ ಪುಸ್ತಕ, ಹೊಸ ಸಮವಸ್ತ್ರ ಧರಿಸಿ 8ನೇ ತರಗತಿಯನ್ನು ಆರಂಭಿಸಬೇಕಿದ್ದ ನಿಯಾ ಲೆನಿನ್ (13) ಎಂಬ ವಿದ್ಯಾರ್ಥಿನಿ, ಹಾವಿನ ಕಡಿತದ ತೀವ್ರ ವಿಷದಿಂದಾಗಿ 24 ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಡಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಆರೂರ್ ಸೇಂಟ್ ಆಗಸ್ಟೀನ್ಸ್ ಹೈಯರ್ ಸೆಕೆಂಡರಿ ಶಾಲೆಯ ಈ ವಿದ್ಯಾರ್ಥಿನಿಯ ಸಾವು ಇಡೀ ಗ್ರಾಮ ಮತ್ತು ಶಾಲಾ ಸಮುದಾಯವನ್ನು ಆಘಾತ ಹಾಗೂ ಶೋಕ ಸಾಗರದಲ್ಲಿ ಮುಳುಗಿಸಿದೆ.ಸ್ಥಳೀಯ ದೇವಸ್ಥಾನದ ಅರ್ಚಕ ದಂಪತಿಯಾದ ಲೆನಿನ್ ಮತ್ತು ರಾಜಿ…
-

50ಕ್ಕೂ ಹೆಚ್ಚು ಗಾಯಗಳು, ಸುಟ್ಟ ಗುರುತುಗಳು; ಪುಟ್ಟ ಕಂದಮ್ಮನ ದೇಹದಲ್ಲಿ ಬಯಲಾಯ್ತು ಚಿತ್ರಹಿಂಸೆಯ ಕರಾಳತೆ
ತಿರುವನಂತಪುರಂ/ನೆಡುಮಂಗಾಡ್ : ಕೇರಳದಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಅತ್ಯಂತ ಭೀಕರ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಒಂದೂವರೆ ವರ್ಷದ ಅರ್ಷಿದ್ ಎಂಬ ಪುಟ್ಟ ಮಗುವಿನ ದುರಂತ ಸಾವು, ದೀರ್ಘಕಾಲದ ಚಿತ್ರಹಿಂಸೆ ಹಾಗೂ ತಪ್ಪಿದ ಕೌಟುಂಬಿಕ ಎಚ್ಚರಿಕೆಗಳ ಕರಾಳ ಕಥೆಯನ್ನು ಬಿಚ್ಚಿಟ್ಟಿದೆ. ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ತಾಯಿ ಅಖಿಲಾ (24 ವರ್ಷ) ಮತ್ತು ಆಕೆಯ ಲಿವ್-ಇನ್ ಸಂಗಾತಿ ಅಶ್ಕರ್ (31 ವರ್ಷ) ಎಂಬುವವರನ್ನು ನೆಡುಮಂಗಾಡ್ ಪೊಲೀಸರು ಬಂಧಿಸಿದ್ದಾರೆ.ಈ ಘಟನೆಯು ಮೇ 29ರ ಶುಕ್ರವಾರದಂದು ಮೊದಲು…
-

ಬುದ್ಧಿವಾದ ಹೇಳಿದ್ದೇ ತಪ್ಪಾಯಿತೇ? ಮದ್ಯದ ಅಮಲಿನಲ್ಲಿ ಸ್ವಂತ ಚಿಕ್ಕಪ್ಪನ ಕೊಂದ ವ್ಯಕ್ತಿ
ಬಂಟ್ವಾಳ : ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ಅತ್ಯಂತ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಮನೆಯಲ್ಲಿ ದೈವಿಕ ಕಾರ್ಯಕ್ರಮ ನಡೆಯುತ್ತಿದ್ದಾಗಲೇ, ಮದ್ಯದ ಅಮಲಿನಲ್ಲಿ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಯುವಕನೋರ್ವ ತನ್ನ ಸ್ವಂತ ಚಿಕ್ಕಪ್ಪನ ಕುತ್ತಿಗೆಗೇ ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದಿದ್ದಾನೆ.ಇಲ್ಲಿನ ನಿವಾಸಿ ಮಧುಸೂಧನ ( 38) ಅವರು ಮೃತಪಟ್ಟವರಾಗಿದ್ದು, ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಕೊಲೆಗೈದವನಾಗಿದ್ದಾನೆ.ಕಾಡಬೆಟ್ಟು ನಿವಾಸಿ ಕೇಶವ ಪೂಜಾರಿ ಅವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ…
-

ಅಭಿಷೇಕ್ ಬ್ಯಾನರ್ಜಿ ಮೇಲೆ ಪೂರ್ವ ಯೋಜಿತ ದಾಳಿ- ಐವರು ಬಂಧನ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್(ಟಿಎಂಸಿ) ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನುಪೊಲೀಸರು ಬಂಧಿಸಿದ್ದಾರೆ.ಬಂಧಿತರ ಪೈಕಿ ನಿರ್ಮಲ್ ಸೇನ್ಗುಪ್ತಾ, ದೇಬಾಶಿಶ್ ದತ್ತ ಮತ್ತು ಕಾಜಲ್ ದಾಸ್ ಸೋನಾರ್ಪುರದ ದಕ್ಷಿಣದ ಮಾಜಿ ಟಿಎಂಸಿ ಶಾಸಕಿ ಲವ್ಲಿ ಮೈತ್ರಾ ಅವರ ಆಪ್ತರು ಎಂದು ತಿಳಿದುಬಂದಿದೆ.ಬಿಜೆಪಿಯವರು ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಘಟನೆ ನಡೆದ ವೇಳೆ ಪೊಲೀಸರು ಸ್ಥಳದಲ್ಲಿರಲಿಲ್ಲ. ಘಟನೆಯ ಇಡೀ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ಘಟನೆ ಬಗ್ಗೆ ಪಶ್ಚಿಮ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











