Category: ಕರಾವಳಿ
-

ಮಂಗಳೂರು: ಮುಡಾದಲ್ಲಿ ಮಾಜಿ ಆಯುಕ್ತರ ವಾಹನ ಡ್ರೈವರ್ ಗಳು ದಲ್ಲಾಳಿಗಳಾಗಿ ಕಾರುಬಾರು
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ( ಮುಡಾ) ದ ಮಾಜಿ ಆಯುಕ್ತರ ವಾಹನ ಡ್ರೈವರ್ ಗಳು ಈಗ ಬಹುದೊಡ್ಡ ಬ್ರೋಕರ್ ಗಳಾಗಿ ಮುಡಾದ ಒಳಗೆ ತುಂಬಿದ್ದಾರೆ. ಈ ದಲ್ಲಾಳಿಗಳ ಹಾವಲಿಯಿಂದ ಇಲಾಖೆಯಲ್ಲಿ ನಿಯಮ ಬಾಹಿರ ಅತಿಹೆಚ್ಚು ವ್ಯವಹಾರ ದಲ್ಲಾಳಿ ಮತ್ತು ಅಧಿಕಾರಿಗಳ ನಡುವೆ ಲಂಚದಿಂದ ನಡೆಯುತ್ತಿದೆ. ಈ ವ್ಯವಸ್ಥೆಯಿಂದ ಸಾಮಾನ್ಯ ಜನರ ಕೆಲಸಗಳು ಮೂಲೆಗುಂಪುಯಾಗಿವೆ. ಕಂತೆ ಕಂತೆ ಹಣ ನೀಡುವವರ ಪೈಲ್ ಗಳು ಅತೀ ವೇಗವಾಗಿ ಮುಂದುವರಿದು ಆ ಕೆಲಸಗಳು ತಕ್ಷಣ ಮಾತ್ರದಲ್ಲಿ ನಡೆಯುತ್ತದೆ. ಇದರಿಂದಾಗಿ ಸಾಮಾನ್ಯ ಜನರು…
-

ಕಾರ್ಕಳದಲ್ಲಿ ಜಮೀನ್ದಾರಿಕೆ ಜೀವಂತ..!! ಬಡ ಕುಟುಂಬಗಳ ಮೇಲೆ ದೌರ್ಜನ್ಯ
ಕಾರ್ಕಳ: ಇಲ್ಲಿಯ ಕುಕ್ಕುಂದೂರು ಪರಿಸರದ ಎರಡು ಬಡ ಕುಟುಂಬಗಳಿಗೆ ಸ್ಥಳೀಯ ಜಮೀನುದಾರರೊಬ್ಬರು ಹಕ್ಕುಪತ್ರ ಸಿಗದಂತೆ ರಾಜಕೀಯ ಪ್ರಭಾವ ಬಳಸಿ ಅಡ್ಡಿ ಪಡಿಸುತ್ತಿರುವ ಆರೋಪ ಕೇಳಿ ಬಂದಿದೆ. ಕಾರ್ಕಳದಲ್ಲಿ ಈ ಕುಟುಂಬ ಇತ್ತೀಚಿಗೆ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. ಒಂದು ಕುಟುಂಬ ಕುಲಾಲ ಸಮುದಾಯದ ಗುಲಾಬಿ ಮೂಲ್ಯರದ್ದು ಹಾಗೂ ಅದರ ಜೊತೆಗೆ ವಿಶ್ವಕರ್ಮ ಸಮುದಾಯದ ಜಯಂತಿ ಆಚಾರ್ಯರಿಗೆ ಅನ್ಯಾಯ ಆಗಿರುವ ಬಗ್ಗೆ ಆರೋಪಿಸಲಾಗಿದೆ. ಈ ಕುಟುಂಬಗಳಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕುತ್ತಿರುವುದಲ್ಲದೆ ಕೃಷಿಗಳನ್ನು ನಾಶಪಡಿಸಿ ವಿನಃಕಾರಣ…
-

ಬೆಳ್ತಂಗಡಿ: ಅಕ್ರಮವಾಗಿ ಶೇಖರಿಸಿದ 4,175 ಲೀಟರ್ ಡೀಸೆಲ್ ಪತ್ತೆ- ಪ್ರಕರಣ ದಾಖಲು
ಬೆಳ್ತಂಗಡಿ: ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 4,175 ಲೀಟರ್ ಡೀಸೆಲ್ ಅನ್ನು ಪೊಲೀಸರು ಪತ್ತೆಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ನಡೆದಿದೆ. ಮಾರ್ಚ್ 9ರಂದು ರಾತ್ರಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ. ಅವರಿಗೆ ಬಂದ ಮಾಹಿತಿಯ ಮೇರೆಗೆ, ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳ ತಂಡ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್ ಪರಿಶೀಲನೆ ನಡೆಸಿದಾಗ ಸುಮಾರು 200 ಲೀಟರ್ ಸಾಮರ್ಥ್ಯದ 20…
-

ಉಡುಪಿ: ಮಹಿಳೆಯ ಬರ್ಬರ ಹತ್ಯೆ- ಆರೋಪಿಗಳಿಬ್ಬರ ಬಂಧನ
ಉಡುಪಿ: ನಗರದ ಹೊರವಲಯದ ದೊಂದೂರುಕಟ್ಟೆಯ ಮಣಿಪುರ ಗ್ರಾಮದ ಅರಬಿ ಕನರಾಡಿ ಎಂಬಲ್ಲಿ ಮಹಿಳೆಯೊಬ್ಬರನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ವನಜಾ ಪೂಜಾರ್ತಿ (60) ಕೊಲೆಯಾದ ಮಹಿಳೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಗಳಾದ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಲೇರಿಯನ್ ಮೆಂಡೊನ್ಸಾ ಹಾಗೂ ಪ್ರವೀಣ್ ಮೆಂಡೊನ್ಸಾ ಅವರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ವನಜಾ ಪೂಜಾರ್ತಿಯವರೊಂದಿಗೆ ಆಗಾಗ್ಗೆ ಇವರಿಬ್ಬರು ಮದ್ಯಪಾನ ಮಾಡುತ್ತಿದ್ದರು. ಮಾರ್ಚ್ 9 ರಂದು ಸಂಜೆ 5 ಗಂಟೆಯಿಂದ ಮಾರ್ಚ್ 10…
-

ಬಂಟ್ವಾಳ: ಬಸ್ನಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅಂತಾರಾಜ್ಯ ಕಳ್ಳನ ಬಂಧನ- 20 ಲಕ್ಷ ರೂ. ಮೌಲ್ಯದ ಸ್ವತ್ತು ವಶ
ಬಂಟ್ವಾಳ: ಚಲಿಸುವ ಬಸ್ನಲ್ಲಿ ಬ್ಯಾಗ್ ಒಳಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಯನ್ನು ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆಯ ನಿವಾಸಿ ಸಮದ್ ಖಾನ್ (37) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 174 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ನವೆಂಬರ್ 19, 2025 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳವು ನಡೆದಿತ್ತು. ಪ್ರಯಾಣಿಕರೊಬ್ಬರು…
-

ಕಾರ್ಕಳ: ಸಾಕ್ಷಿದಾರನ ಪತ್ನಿಗೆ ತಲವಾರಿನಿಂದ ಹಲ್ಲೆ ಯತ್ನ..!! ಕೊಲ್ಲುವುದಾಗಿ ಜೀವ ಬೆದರಿಕೆ
ಕಾರ್ಕಳ : ನ್ಯಾಯಾಲಯದಲ್ಲಿ ಪತಿ ಸಾಕ್ಷಿ ಹೇಳಿದ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿ, ಪತಿ ಪತ್ನಿ ಇಬ್ಬರನ್ನೂ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದ ಬೈಲೂರಿನಲ್ಲಿ ಮಾ.6 ರಂದು ನಡೆದಿದೆ. ಗಣೇಶ್ ಪೂಜಾರಿ ಎಂಬಾತ ಮಾ.6 ರಂದು ಕಾರಿನಲ್ಲಿ ಬಂದು ಬೈಲೂರು ಪಂಚಾಯತ್ ಮುಂಭಾಗದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪುಷ್ಪಲತಾ ಎಂಬವರಿಗೆ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ಪುಷ್ಪಲತಾ ಮತ್ತು ಅವರ ಪತಿ ರಾಜೇಂದ್ರ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ತನ್ನ ವಿರುದ್ಧ…
-

ಉಡುಪಿ ಜಿಲ್ಲಾ PWD ಅಧಿಕಾರಿಗಳ ಅಮಾನವೀಯ ಅಟ್ಟಹಾಸ – ಬಡವರ ಹೊಟ್ಟೆಯ ಮೇಲೆ ಬರೆ ಎಳೆದು ಭಾರಿ ಸದ್ದು ಮಾಡುತ್ತಿದೆ ಅಧಿಕಾರಿಗಳ ದೌರ್ಜನ್ಯ
ಬ್ರಹ್ಮಾವರ/ಉಡುಪಿ: ಉಡುಪಿ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ (PWD) ಅಧಿಕಾರಿಗಳು ಒಂದೆಡೆ ಕೋಟಿಗಟ್ಟಲೆ ಹಗರಣಗಳಲ್ಲಿ ಮುಳುಗಿದ್ದರೆ, ಇನ್ನೊಂದೆಡೆ ಬಡ ಶ್ರಮಿಕರ ಮೇಲೆ ತಮ್ಮ ಅಧಿಕಾರದ ದರ್ಪ ತೋರುವ ಮೂಲಕ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಈ ಅಧಿಕಾರಿಗಳು ನಡೆಸಿದ ಅಮಾನವೀಯ ಕೃತ್ಯ ಈಗ ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸುತ್ತಿದೆ. PWD ಅಧಿಕಾರಿಗಳ ಅಟ್ಟಹಾಸ: ಬಡವರ ಹೊಟ್ಟೆಗೆ ಮಣ್ಣು!ಚಾಂತಾರು ವ್ಯಾಪ್ತಿಯಲ್ಲಿ ರಸ್ತೆಯಿಂದ ಬದಿಗೆ, ಮರದ ಅಡಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಅಡ್ಡಿಯಾಗದಂತೆ…
-

ಉಡುಪಿಯಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್- ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ
ಉಡುಪಿ : ಅಲೆವೂರು, ಬೆಳ್ಳೆ, ಕುಂತಳನಗರ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳರಿದ್ದಾರೆಂಬುದಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಮಕ್ಕಳ ಕಳ್ಳರು ಮುಸುಕು ಹಾಕಿಕೊಂಡು ಅಲೆವೂರು, ಬೆಳ್ಳೆ, ಕುಂತಳನಗರ ವ್ಯಾಪ್ತಿಯಲ್ಲಿ ತಿರುಗುತ್ತಿದ್ದಾರೆ. ದಯವಿಟ್ಟು ಮಕ್ಕಳು ಬೆಳಗ್ಗೆ ರಿಕ್ಷಾ ಹತ್ತುವಾಗ ಮತ್ತು ಸಾಯಂಕಾಲ ಇಳಿಯುವಾಗ ಪೋಷಕರು ಕಡ್ಡಾಯವಾಗಿ ಇರಲೇ ಬೇಕು. ಮಕ್ಕಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.…
-

ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್
ಬಂಟ್ವಾಳ : ಎರಡು ದಿನಗಳ ಹಿಂದೆ ಫರಂಗಿಪೇಟೆ ಸಮೀಪ ನೇತ್ರಾವತಿ ನದಿ ದಡದಲ್ಲಿ ಆಧಾರ್ ಕಾರ್ಡ್ ರಾಶಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಫರಂಗಿಪೇಟೆ ಅಂಚೆ ಇಲಾಖೆ ವಿರುದ್ಧ ಕೇಸ್ ದಾಖಲಿಸಲಾಗಿದೆ. ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿ ದಡದಲ್ಲಿ ಮಾ.3ರಂದು ಸಮಯ ಸಂಜೆ ಸ್ಥಳೀಯ ನಿವಾಸಿಗಳ 2013ರಿಂದ 2023ರವರೇಗಿನ ಅಂದಾಜು 500 ಮೂಲ ಆಧಾರ್ ಕಾರ್ಡ್ಗಳು ಪತ್ತೆಯಾಗಿದ್ದವು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆಯ ಪೋಸ್ಟ್ ಆಫೀಸಿನ ಸೀಲ್ ಪತ್ತೆಯಾಗಿದ್ದು, ಮೂಲ ಆಧಾರ್ ಕಾರ್ಡ್ ಪ್ರತಿಗಳು ಸಾರ್ವಜನಿಕರ…
-

ಬೆಳ್ತಂಗಡಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ ಸಂಚಾರ- ಬೈಕ್ ಹಾಗೂ ಸವಾರ ಪೊಲೀಸ್ ವಶ
ಪಶ್ಚಿಮ ಬಂಗಾಳದ ನೋಂದಾಯಿತ ಬೈಕ್ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಸಂಚರಿಸುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ಪತ್ತೆಹಚ್ಚಿದ್ದಾರೆ. ಮಾರ್ಚ್5ರಂದು ಬೆಳ್ತಂಗಡಿ ಸಂತೆಕಟ್ಟೆ ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಇಲ್ಲದೆ CRT 9988 ನಂಬರ್ ಹೊಂದಿದ RX100 ಬೈಕ್ನಲ್ಲಿ ಬಂದ ಕಳಿಯ ಗ್ರಾಮದ ನವಾಜ್ (19) ಎಂಬ ಯುವಕನನ್ನು ಪೊಲೀಸರು ತಡೆದು ಪರಿಶೀಲಿಸಿದರು. ಪರಿಶೀಲನೆಯ ವೇಳೆ ಬೈಕ್ನ ನಂಬರ್, ದಾಖಲೆಗಳು ಹಾಗೂ ಚಾಸಿಸ್–ಇಂಜಿನ್ ಸಂಖ್ಯೆಗಳು ಹೊಂದಿಕೆಯಾಗಿಲ್ಲ. ಹೆಚ್ಚಿನ ವಿಚಾರಣೆ ನಡೆಸಿದಾಗ ಬೈಕ್ ಮೂಲತಃ West…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











