ಮಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ಡಿ. ಕೆ .ಶಿವಕುಮಾರ್ ,ಸಚಿವರಾಗಿ ಯು. ಟಿ.ಖಾದರ್ ರವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ಅವರಿಗೆ ಅಭಿನಂದನೆಗಳು. ನೂತನ ಆಡಳಿತದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗಲಿ ಮತ್ತು ಮತೀಯ ಸೌಹಾರ್ದತೆ ಉತ್ತಮವಾಗಿ ಕೋಮುವಾದಿ ಶಕ್ತಿಗಳ ನಿಯಂತ್ರಣ ಆಗಲಿ. ಅನುಭವಿ ರಾಜಕಾರಣಿ ಆದ ಶ್ರೀ ಯು.ಟಿ.ಖಾದರ್ ರವರು ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕ ಜನತೆಗೆ ಉತ್ತಮ ಸೇವೆ ಸಲ್ಲಿಸುವಂತಾಗಲಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ, ಪರಿಷತ್ ಸ್ಥಾನಕ್ಕೆ ಆಯ್ಕೆಯಾದ ಪಕ್ಷ ನಿಷ್ಠ, ಹಿರಿಯ ರಾಜಕಾರಣಿ, ಸಂವಿಧಾನ ಪ್ರೇಮಿ ಬಿ.ಕೆ.ಹರಿಪ್ರಸಾದ್ ರವರಿಗೆ ಮತ್ತು ಪಿ.ವಿ.ಮೋಹನ್ ರವರಿಗೆ ಅಭಿನಂದನೆಗಳು. ಹರಿಪ್ರಸಾದ್ ರವರ ಅವಧಿಯಲ್ಲಿ ಪಕ್ಷವು ಸಂಘಟಿತವಾಗಿ ಬೆಳೆಯಲಿ, ರಾಜ್ಯದ ಸರ್ವ ವಿಭಾಗದ ಜನರಿಗೆ ಸಮಾನತೆಯ ನಾಯಕತ್ವ ಸಿಗುವಂತಾಗಲಿ. ಕೆ.ಅಶ್ರಫ್( ಮಾಜಿ ಮೇಯರ್)ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ .
