Category: ಕರಾವಳಿ

  • ಮಂಗಳೂರು: ಆರೀಫ್ ನ ಬರ್ಬರ ಹತ್ಯೆ- ಬುಡೋಳಿಯಲ್ಲಿ ಪತ್ತೆಯಾಯ್ತು ಹಂತಕರು ಬಳಸಿದ್ದ ಕಾರು!
    ,

    ಮಂಗಳೂರು: ಆರೀಫ್ ನ ಬರ್ಬರ ಹತ್ಯೆ- ಬುಡೋಳಿಯಲ್ಲಿ ಪತ್ತೆಯಾಯ್ತು ಹಂತಕರು ಬಳಸಿದ್ದ ಕಾರು!

    ಮಂಗಳೂರು: ಫ್ಲೈಓವರ್ ಮೇಲೆ ಇಂದು ಮಾರ್ಚ್ 27ರಂದು ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದ ರೌಡಿಶೀಟರ್ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ. ಕೃತ್ಯಕ್ಕೆ ಬಳಸಲಾಗಿದ್ದ ಕಾರು ಬಂಟ್ವಾಳ ತಾಲೂಕಿನ ಬುಡೋಳಿ ಎಂಬಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಿಫ್‌ನನ್ನು ಬೈಕ್‌ನಿಂದ ಕೆಡವಿ ಹತ್ಯೆ ಮಾಡಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ನಡುವೆ ಬಂಟ್ವಾಳದ ಬುಡೋಳಿಯಲ್ಲಿ ಸಂಶಯಾಸ್ಪದ ಕಾರು ಇರುವ ಬಗ್ಗೆ ಮಾಹಿತಿ ಲಭಿಸಿದ…

    Continue Reading

  • ಮಂಗಳೂರು: ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳಿಂದ ತಲಾವಾರು ದಾಳಿ..!! ಆರೀಫ್ ನ ಬರ್ಬರ ಹತ್ಯೆ
    ,

    ಮಂಗಳೂರು: ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳಿಂದ ತಲಾವಾರು ದಾಳಿ..!! ಆರೀಫ್ ನ ಬರ್ಬರ ಹತ್ಯೆ

    ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ (46) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ತಕ್ಷಣವೇ, ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ…

    Continue Reading

  • ಬೆಳ್ತಂಗಡಿ: ಬೆಳಾಲು ಸೊಸೈಟಿ ವಂಚನೆ ಕೇಸ್‌..!!  ಪರಾರಿಯಾಗಿದ್ದ ಎರಡನೇ ಆರೋಪಿ ಬಂಧನ
    ,

    ಬೆಳ್ತಂಗಡಿ: ಬೆಳಾಲು ಸೊಸೈಟಿ ವಂಚನೆ ಕೇಸ್‌..!! ಪರಾರಿಯಾಗಿದ್ದ ಎರಡನೇ ಆರೋಪಿ ಬಂಧನ

    ಬೆಳ್ತಂಗಡಿ : ಬೆಳಾಲು ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಸುಮಾರು 2 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿಯನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಾಲು ನಿವಾಸಿ ಪ್ರಶಾಂತ್ ಬಿ. ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದಾಶಿವ ಯಾನೆ ಸುಜಿತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನೊಬ್ಬ ಆರೋಪಿಯಾಗಿದ್ದ ಪ್ರಶಾಂತ್ ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದನು. ಪೊಲೀಸರ ಮಾಹಿತಿ ಪ್ರಕಾರ, ಸಹಕಾರಿ ಸಂಘದ ಸಿಬ್ಬಂದಿಗಳಾದ ಸದಾಶಿವ ಯಾನೆ ಸುಜಿತ್ ಹಾಗೂ ಪ್ರಶಾಂತ್ ಬಿ. ಅವರು…

    Continue Reading

  • ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ – ಮಂಗಳೂರು-ಸೂರತ್ ವಿಶೇಷ ರೈಲು ಇನ್ನು ಮುಂದೆ ಖಾಯಂ ಸೇವೆ

    ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ – ಮಂಗಳೂರು-ಸೂರತ್ ವಿಶೇಷ ರೈಲು ಇನ್ನು ಮುಂದೆ ಖಾಯಂ ಸೇವೆ

    ಮಂಗಳೂರು: ವಾರದಲ್ಲಿ ಎರಡು ದಿನ ಸಂಚರಿಸುವ ಸೂರತ್-ಮಂಗಳೂರು ಜಂಕ್ಷನ್-ಸೂರತ್ ವಿಶೇಷ ರೈಲನ್ನು ಖಾಯಂಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದು, ಮಂಗಳೂರು-ಸೂರತ್ ವಿಶೇಷ ರೈಲು ಇನ್ನುಮುಂದೆ ಖಾಯಂ ರೈಲು ಸೇವೆ ನೀಡಲಿದೆ. ಕರಾವಳಿ ಕರ್ನಾಟಕದಿಂದ ಮುಂಬಯಿ ಬೆಸೆದು ಸೂರತ್ ತಲುಪುವ ಈ ರೈಲು ಈವರೆಗೆ ವಿಶೇಷ ರೈಲಾಗಿ ಸಾಗುತ್ತಿತ್ತು. ವಾರಕ್ಕೆರಡು ಬಾರಿ ಸೇವೆ ನೀಡುವ ಈ ರೈಲನ್ನು ಈ ಖಾಯಂ ರೈಲಾಗಿ ಘೋಷಿಸಿದ್ದು ಕರಾವಳಿ ಜನರಿಗೆ ಇದು…

    Continue Reading

  • ಮಂಗಳೂರು: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

    ಮಂಗಳೂರು: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

    ಮಂಗಳೂರು: ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ 2009 ರಲ್ಲಿ ಕಾಪಿರೈಟ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ನಾಟೆಕಲ್ ನಿವಾಸಿ ರಿಯಾಜ್ ಎಂಬಾತನನ್ನು 17 ವರ್ಷಗಳ ಬಳಿಕ ಇದೀಗ ಬಂಧಿಸಲಾಗಿದೆ. ಬರ್ಕೆ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೊಪಿಯನ್ನು ಮಾರ್ಚ್ 24 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.  ನ್ಯಾಯಾಲಯವು 2016 ರಲ್ಲಿ ಈ ಪ್ರಕರಣವನ್ನು ಎಲ್ ಪಿ ಸಿ ಅಂದರೆ ಲಾಂಗ್ ಪೆಂಡಿಗ್ ಕೇಸ್…

    Continue Reading

  • ಮಂಗಳೂರು: ಪಾಲಿಕೆಯಲ್ಲಿ ಪ್ರಮಾಣಪತ್ರಕ್ಕಾಗಿ ಸಾರ್ವಜನಿಕರ ಪರದಾಟ; ಅಧಿಕಾರಿಗಳ ವಿರುದ್ಧ ಆಕ್ರೋಶ

    ಮಂಗಳೂರು: ಪಾಲಿಕೆಯಲ್ಲಿ ಪ್ರಮಾಣಪತ್ರಕ್ಕಾಗಿ ಸಾರ್ವಜನಿಕರ ಪರದಾಟ; ಅಧಿಕಾರಿಗಳ ವಿರುದ್ಧ ಆಕ್ರೋಶ

    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದು, ಪಾಲಿಕೆ ಅಧಿಕಾರಿಗಳ ವಿಳಂಬ ನೀತಿಯ ವಿರುದ್ಧ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಒಂದು ವಾರದಿಂದ ಸಾರ್ವಜನಿಕರು ಪ್ರಮಾಣಪತ್ರಕ್ಕಾಗಿ ಪಾಲಿಕೆಗೆ ಅಲೆಯುತ್ತಿದ್ದಾರೆ. ಮಂಗಳವಾರ ಮುಂಜಾನೆಯಿಂದಲೇ ನೂರಕ್ಕೂ ಅಧಿಕ ಮಂದಿ ಕ್ಯೂನಲ್ಲಿ ನಿಂತಿದ್ದರೂ, ಮಧ್ಯಾಹ್ನ 3 ಗಂಟೆಯವರೆಗೆ ಕೌಂಟರ್ ತೆರೆದಿರಲಿಲ್ಲ. ಸಂಜೆ ವೇಳೆಗೆ ಕೌಂಟರ್ ತೆರೆದ ಸಿಬ್ಬಂದಿ, ಕೇವಲ 20 ಮಂದಿಗೆ ಮಾತ್ರ ಟೋಕನ್ ನೀಡುವುದಾಗಿ ಹೇಳಿದ್ದು ಸಾರ್ವಜನಿಕರ…

    Continue Reading

  • ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿಗೆ ಬಂಧನ- 10ಕ್ಕೂ ಹೆಚ್ಚು ವಾರಂಟ್ ಹೊಂದಿದ್ದ ವ್ಯಕ್ತಿ ಪೊಲೀಸರ ಬಲೆಗೆ
    ,

    ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿಗೆ ಬಂಧನ- 10ಕ್ಕೂ ಹೆಚ್ಚು ವಾರಂಟ್ ಹೊಂದಿದ್ದ ವ್ಯಕ್ತಿ ಪೊಲೀಸರ ಬಲೆಗೆ

    ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ :117/2019 ಹಾಗೂ ಅ.ಕ್ರ :111/2020 ಪ್ರಕರಣಗಳಿಗೆ ಸಂಬಂಧಿಸಿದಂತೆ, ಬಂಟ್ವಾಳ ACJ & JMFC ನ್ಯಾಯಾಲಯಕ್ಕೆ ಹಲವು ಬಾರಿ ಹಾಜರಾಗದೇ ತಪ್ಪಿಸಿಕೊಂಡಿದ್ದ ಬಂಟ್ವಾಳ ವೀರಕಂಬ ನಿವಾಸಿ ಮಹಮ್ಮದ್ ಅಶ್ರಫ್ (38) ಅವರನ್ನು ಬಂಧಿಸಲಾಗಿದೆ. ಆರೋಪಿತನ ವಿರುದ್ಧ ಈಗಾಗಲೇ 10ಕ್ಕೂ ಹೆಚ್ಚು ಬಾರಿ ವಾರಂಟ್ ಜಾರಿಯಾಗಿದ್ದರೂ, ಆತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.…

    Continue Reading

  • ಮಂಗಳೂರು: ನಗರದ ಪಾಂಡೇಶ್ವರದ ಶಿವನಗರದಲ್ಲಿ ಅನಧಿಕೃತ PG ..!! ಇಲ್ಲಿನ ವಿದ್ಯಾರ್ಥಿಗಳ ಪುಡಾಂಟಿಕೆಯಿಂದ ಬೇಸತ್ತ ಸ್ಥಳೀಯರು
    ,

    ಮಂಗಳೂರು: ನಗರದ ಪಾಂಡೇಶ್ವರದ ಶಿವನಗರದಲ್ಲಿ ಅನಧಿಕೃತ PG ..!! ಇಲ್ಲಿನ ವಿದ್ಯಾರ್ಥಿಗಳ ಪುಡಾಂಟಿಕೆಯಿಂದ ಬೇಸತ್ತ ಸ್ಥಳೀಯರು

    ಮಂಗಳೂರು: ನಗರದ ಪಾಂಡೇಶ್ವರದ ಶಿವನಗರ ಎಂಬಲ್ಲಿ ಮನೆ ಮಾಲೀಕರು ಮನೆ ಮೇಲೆ ಯಾವುದೇ ಪರವಾನಗಿ ಪಡೆಯದೇ ಅನಧಿಕೃತ ಕಟ್ಟಡ ನಿರ್ಮಿಸಿ ವಸತಿ ನಿಲಯವನ್ನು ವಾಣಿಜ್ಯ ಕಟ್ಟಡವನ್ನಾಗಿ ಮಾಡಿ ಸುಮಾರು 40 ಮಂದಿ ಪಿ.ಜಿ ವಿದ್ಯಾರ್ಥಿಗಳ ನ್ನು ಹಾಕಿ ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.ಇಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೇ ಇದ್ದರೂ ವಿದ್ಯಾರ್ಥಿಗಳಿಂದ 4 ಸಾವಿರ ರೂ . ಹಣ ಪಡೆದು ಮಾಲೀಕರು ಮೆರೆಯುತ್ತಿದ್ದಾರೆ. ಅಷ್ಟೇ ಅಲ್ಲ ಇಲ್ಲಿನ ವಿದ್ಯಾರ್ಥಿಗಳ ಬೈಕ್…

    Continue Reading

  • ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆ? ಸಿಬಿಐಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್‌
    ,

    ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆ? ಸಿಬಿಐಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

    ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ 13 ವರ್ಷಗಳ ಹಿಂದೆ ನಡೆದಿದ್ದ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಸುಪ್ರೀಂಕೋರ್ಟ್ ಸಿಬಿಐಗೆ ನೊಟೀಸ್ ಜಾರಿ ಮಾಡಿದೆ.ಸೌಜನ್ಯ ತಾಯಿ ಕುಸುಮಾತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿರುವುದರಿಂದ ಈ ಪ್ರಕರಣ ಮರಳಿ ತನಿಖೆಯಾಗುವ ನಿರೀಕ್ಷೆ ಮೂಡಿದೆ. 2012ರ ಅಕ್ಟೋಬರ್‌ನಲ್ಲಿ ನಾಪತ್ತೆಯಾಗಿದ್ದ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯ ಅವರ ಮೃತದೇಹ ಮರುದಿನ ಅತ್ಯಾಚಾರಕ್ಕೀಡಾಗಿ…

    Continue Reading

  • ಉಡುಪಿ : ಟ್ರೇಡಿಂಗ್‌ ಆ್ಯಪ್‌ನಲ್ಲಿ ಹೂಡಿಕೆ- ಮಹಿಳೆಗೆ ಲಕ್ಷ ರೂ. ಆನ್‌ಲೈನ್ ವಂಚನೆ
    ,

    ಉಡುಪಿ : ಟ್ರೇಡಿಂಗ್‌ ಆ್ಯಪ್‌ನಲ್ಲಿ ಹೂಡಿಕೆ- ಮಹಿಳೆಗೆ ಲಕ್ಷ ರೂ. ಆನ್‌ಲೈನ್ ವಂಚನೆ

    ಉಡುಪಿ: ಟ್ರೇಡಿಂಗ್ ಆ್ಯಪ್‌ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75ಲಕ್ಷ ರೂ. ಆನ್‌ಲೈನ್ ವಂಚನೆಗೆ ಒಳಗಾದ ಘಟನೆ ನಡೆದಿದೆ. ಸಹನ ಎಂಬವರು ಟ್ರೇಡಿಂಗ್ ಬಗ್ಗೆ ತಿಳಿದುಕೊಳ್ಳಲು ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿದ್ದು, ಮುಂದೆ 15 ದಿನಗಳ ನಂತರ ಅಪರಿಚಿತನೋರ್ವ ಕರೆ ಮಾಡಿ, ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದನು. ಅದರಲ್ಲಿ ಲಿಂಕ್ ನ್ನು ಕಳುಹಿಸಿ ಕೆವೈಸಿ ಡಿಟೈಲ್ ಫಿಲ್ ಮಾಡುವಂತೆ ತಿಳಿಸಲಾಗಿತ್ತು. ನಂತರ ಟ್ರೇಡಿಂಗ್ ಬಗ್ಗೆ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಸಹನ ಮಾ.6ರಿಂದ ಮಾ.14ರವರೆಗೆ ಹಂತ ಹಂತವಾಗಿ ಒಟ್ಟು 11,75,000ರೂ. ಹಣವನ್ನು…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed