, ,

ನಡೆದುಕೊಂಡು ಹೋಗಲು ದಾರಿಯು ಇಲ್ಲದೇ ಭೂ ಅಕ್ರಮ, ಎಷ್ಟೇ ದೂರು ನೀಡಿದರು ಕ್ಯಾರೇ ಅನ್ನದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು

ಉಳ್ಳಾಲ:ಉಳ್ಳಾಲ ನಗರಸಭೆ ವ್ಯಾಪ್ತಿಯ ಕಲ್ಲಾಪುವಿನಲ್ಲಿರುವ ಒಂದು ಕಟ್ಟಡದ ಹಿಂಭಾಗದಲ್ಲಿ ಜೆಸ್ಸಿ ಮತ್ತು ಫಿಲೋಮಿನಾ ಎನ್ನುವವರಿಗೆ ಸೇರಿದ ಜಾಗವಿದ್ದು, ಅಲ್ಲಿನ ಅಗಲವಿರುವ ರಸ್ತೆಯ ಪಕ್ಕದಲ್ಲಿ ಅಕ್ಕಪಕ್ಕದ ಬಿಲ್ಡಿಂಗ್ ಮಾಲಕರು ಪರವಾನಿಗೆ ಪಡೆದು ಕಟ್ಟಡ ನಿರ್ಮಿಸಿದ್ದಾರೆ. ಆದರೆ ಕಟ್ಟಡ ನಿರ್ಮಾಣವಾದ ರೀತಿಯಿಂದಾಗಿ ಸಂಬಂಧಿತ ಜಾಗದ ಮಾಲೀಕರಿಗೆ ನಡೆದು ಹೋಗಲು ಕೂಡ ದಾರಿ ಇಲ್ಲದಂತಾಗಿದೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ, ಅವರ ಹಳೆಯ ಮನೆಯ ಎದುರು ಯಾವುದೇ ಪರವಾನಿಗೆ ಇಲ್ಲದೆ ಅತಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಒಂದು ವೇಳೆ ಮಳೆಯ…

ಉಳ್ಳಾಲ:ಉಳ್ಳಾಲ ನಗರಸಭೆ ವ್ಯಾಪ್ತಿಯ ಕಲ್ಲಾಪುವಿನಲ್ಲಿರುವ ಒಂದು ಕಟ್ಟಡದ ಹಿಂಭಾಗದಲ್ಲಿ ಜೆಸ್ಸಿ ಮತ್ತು ಫಿಲೋಮಿನಾ ಎನ್ನುವವರಿಗೆ ಸೇರಿದ ಜಾಗವಿದ್ದು, ಅಲ್ಲಿನ ಅಗಲವಿರುವ ರಸ್ತೆಯ ಪಕ್ಕದಲ್ಲಿ ಅಕ್ಕಪಕ್ಕದ ಬಿಲ್ಡಿಂಗ್ ಮಾಲಕರು ಪರವಾನಿಗೆ ಪಡೆದು ಕಟ್ಟಡ ನಿರ್ಮಿಸಿದ್ದಾರೆ. ಆದರೆ ಕಟ್ಟಡ ನಿರ್ಮಾಣವಾದ ರೀತಿಯಿಂದಾಗಿ ಸಂಬಂಧಿತ ಜಾಗದ ಮಾಲೀಕರಿಗೆ ನಡೆದು ಹೋಗಲು ಕೂಡ ದಾರಿ ಇಲ್ಲದಂತಾಗಿದೆ ಎಂದು ಆರೋಪಿಸಲಾಗಿದೆ.

ಇದರ ಜೊತೆಗೆ, ಅವರ ಹಳೆಯ ಮನೆಯ ಎದುರು ಯಾವುದೇ ಪರವಾನಿಗೆ ಇಲ್ಲದೆ ಅತಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಒಂದು ವೇಳೆ ಮಳೆಯ ಸಮಯದಲ್ಲಿ ಅದು ಕುಸಿದರೆ ನೇರವಾಗಿ ಅವರ ಮನೆಯ ಮೇಲೆಯೇ ಬೀಳುವ ಅಪಾಯವಿದೆ ಎಂದು ಕುಟುಂಬ ಆತಂಕ ವ್ಯಕ್ತಪಡಿಸಿದೆ. ಆ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳು ಸಹ ವಾಸಿಸುತ್ತಿದ್ದು, ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಅಷ್ಟೇ ಅಲ್ಲದೆ, ಮತ್ತೊಂದು ಭಾಗದಲ್ಲಿಯೂ ತಾತ್ಕಾಲಿಕ (ಟೆಂಪರರಿ) ಸ್ಟ್ರಕ್ಚರ್ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ದೂರು ನೀಡಿ ಒಂದು ವರ್ಷ ಕಳೆದರೂ ಉಳ್ಳಾಲ ನಗರಸಭೆಯ ಆಯುಕ್ತರು, ತಹಶೀಲ್ದಾರರು, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು, ಮೂಡಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಶಾಸಕರು, ಸಂಸದರು, ಸಚಿವರು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳವರೆಗೂ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಸಹಾಯ ಅಥವಾ ಕ್ರಮ ದೊರೆತಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ.

ನಗರಸಭೆಯ ಇಂಜಿನಿಯರಿಂಗ್ ವಿಭಾಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ಕಾರಣ, ಈ ಬೃಹತ್ ಕಟ್ಟಡದ ಮಾಲೀಕರು ಪ್ರಭಾವಿ ಹಾಗೂ ಹಣವಂತರಾಗಿರುವುದರಿಂದ ಅವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಈ ಕುರಿತು ಕ್ರೈಂ ವಾರ್ತೆ ವತಿಯಿಂದ ಉಳ್ಳಾಲ ನಗರಸಭೆಯ ಇಂಜಿನಿಯರ್ ತುಳಸಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ, ಅವರು ಕೂಡ ಅಸಡ್ಡೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

  • ಒಂದು ವರ್ಷಕ್ಕೂ ಹೆಚ್ಚು ಕಾಲ ದೂರುಗಳು ಸಲ್ಲಿಕೆಯಾಗಿದ್ದರೂ ಸಂಬಂಧಿತ ಇಲಾಖೆಗಳಿಂದ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವೇನು?
  • ಸಾರ್ವಜನಿಕರ ಸುರಕ್ಷತೆಗೆ ಅಪಾಯವಿದೆ ಎಂಬ ಆರೋಪಗಳಿದ್ದರೂ ನಗರಸಭೆ ಪರಿಶೀಲನೆ ನಡೆಸಿದೆಯೇ?
  • ಪರವಾನಿಗೆ ಇಲ್ಲದೆ ಕಾಂಪೌಂಡ್ ಹಾಗೂ ತಾತ್ಕಾಲಿಕ ನಿರ್ಮಾಣ ನಡೆದಿದೆ ಎನ್ನುವ ಆರೋಪಗಳ ಸತ್ಯಾಸತ್ಯತೆ ಪರಿಶೀಲನೆ ಆಗಿದೆಯೇ?
  • ಪ್ರಭಾವಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆಯೇ?
  • ಅಪಾಯ ಸಂಭವಿಸಿದ ನಂತರವೇ ಸಂಬಂಧಿತ ಇಲಾಖೆ ಎಚ್ಚೆತ್ತುಕೊಳ್ಳಲಿದೆಯೇ?

ಈ ಆರೋಪಗಳ ಕುರಿತು ಸಂಬಂಧಿತ ಇಲಾಖೆಗಳು ಸ್ಪಷ್ಟನೆ ನೀಡಬೇಕಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed