Author: News Editor

  • ಹಿಜಾಬ್, ಜನಿವಾರದ ಬಗ್ಗೆ ಆರ್.ಅಶೋಕ್ ತಲೆ ಕೆಡಿಸುವ ಅಗತ್ಯವಿಲ್ಲ: ಕೆ.ಅಶ್ರಫ್
    ,

    ಹಿಜಾಬ್, ಜನಿವಾರದ ಬಗ್ಗೆ ಆರ್.ಅಶೋಕ್ ತಲೆ ಕೆಡಿಸುವ ಅಗತ್ಯವಿಲ್ಲ: ಕೆ.ಅಶ್ರಫ್

    ಮಂಗಳೂರು: ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಮ್ ವಿಧ್ಯಾರ್ಥಿಗಳು ತಮ್ಮ ಸಂವಿಧಾನಿಕ ಧಾರ್ಮಿಕ ಹಕ್ಕು ಆದ ಶಿರ ವಸ್ತ್ರ ಧಾರಣೆ , ಹಿಜಾಬ್ ಅನ್ನು ಈ ಹಿಂದಿನ ಬಿಜೆಪಿ ಸರಕಾರ ನಿರ್ಬಂಧ ಗೊಳಿಸಿದ ಆದೇಶವನ್ನು ಹಾಲಿ ಸರಕಾರ ಹಿಂದಕ್ಕೆ ಪಡೆದ ವಿಷಯದಲ್ಲಿ ಆರ್.ಅಶೋಕ್ ನಾಟಕೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ!. ಆರ್.ಅಶೋಕ್ ಅವರು ಹಿಜಾಬ್ ಮತ್ತು ಜನಿವಾರದ ಬಗ್ಗೆ ಅತಿಯಾಗಿ ತಲೆ ಕೆಡಿಸಿ ಚಿಂತಿಸಿಕೊಳ್ಳುವ ಅಗತ್ಯ ಇಲ್ಲ!. ಅದು ಅವರಿಗೆ ಸಂಬಂಧಿಸಿದ ವಿಷಯವು ಅಲ್ಲ. ಆರ್. ಅಶೋಕ್ ಗೆ ತಲೆ ಕೆಡಿಸಿಕೊಳ್ಳಲು ಹಲವಾರು…

    Continue Reading

  • ಬುರ್ಖಾ ಧರಿಸಿ ಚಿನ್ನದ ಅಂಗಡಿಗೆ ಎಂಟ್ರಿ: ಖಾರಪುಡಿ ಎರಚಿ ದರೋಡೆ ಯತ್ನ
    ,

    ಬುರ್ಖಾ ಧರಿಸಿ ಚಿನ್ನದ ಅಂಗಡಿಗೆ ಎಂಟ್ರಿ: ಖಾರಪುಡಿ ಎರಚಿ ದರೋಡೆ ಯತ್ನ

    ಬುರ್ಖಾ ಧರಿಸಿ ಗ್ರಾಹಕಿಯಂತೆ ಚಿನ್ನದ ಅಂಗಡಿಗೆ ನುಗ್ಗಿದ ಮಹಿಳೆಯೊಬ್ಬಳು, ಮಾಲೀಕ ಮತ್ತು ಸಿಬ್ಬಂದಿಯ ಕಣ್ಣಿಗೆ ಖಾರಪುಡಿ ಎರಚಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಆಭರಣಗಳನ್ನು ನೋಡುವ ನೆಪದಲ್ಲಿ ಹೊಂಚು ಹಾಕಿದ್ದ ಈ ಕಿರಾತಕಿ, ತನ್ನ ಬಳಿಯಿದ್ದ ಖಾರದಪುಡಿಯನ್ನು ಅವರ ಕಣ್ಣಿಗೆ ಎಸೆದು ಆಭರಣಗಳನ್ನು ಎಗರಿಸಲು ಯತ್ನಿಸಿದ್ದಾಳೆ. ಈ ಇಡೀ ದರೋಡೆ ಯತ್ನದ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ

    Continue Reading

  • ಭುಜ ತಾಗಿದ ಕಾರಣಕ್ಕೆ ಮಾರಣಾಂತಿಕ ಹಲ್ಲೆ: ವೈರಲ್ ವಿಡಿಯೋ ಬಳಿಕ ಪ್ರಕರಣ ದಾಖಲು

    ಭುಜ ತಾಗಿದ ಕಾರಣಕ್ಕೆ ಮಾರಣಾಂತಿಕ ಹಲ್ಲೆ: ವೈರಲ್ ವಿಡಿಯೋ ಬಳಿಕ ಪ್ರಕರಣ ದಾಖಲು

    ಹಾಸನ: ಹಾಸನ ನಗರದ ‘ಎಂ.ಜೆ. ಫಿಟ್‌ನೆಸ್’ (M.J. Fitness) ಜಿಮ್‌ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಭೀಕರ ಹಲ್ಲೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ವ್ಯಾಯಾಮ ಮಾಡುವಾಗ ಅಚಾತುರ್ಯದಿಂದ ಭುಜ ಟಚ್​​ ಆಗಿರುವುದು ದೊಡ್ಡ ಅಪರಾಧ ಎಂಬಂತೆ ವರ್ತಿಸಿದ ವರುಣ್ ಎಂಬಾತ, ಕೀರ್ತನ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಇಬ್ಬರ ನಡುವೆ ಸ್ವಲ್ಪ ಭುಜ ತಗಿದೆ. ಇದನ್ನೇ ನೆಪವಾಗಿಸಿಕೊಂಡ ವರುಣ್,…

    Continue Reading

  • ಬ್ಯಾಂಕ್ ಹಣ ಕಳ್ಳತನಕ್ಕೆ ಯತ್ನ: ಸ್ಥಳೀಯರಿಂದ ಆರೋಪಿಗಳ ಬಂಧನ
    ,

    ಬ್ಯಾಂಕ್ ಹಣ ಕಳ್ಳತನಕ್ಕೆ ಯತ್ನ: ಸ್ಥಳೀಯರಿಂದ ಆರೋಪಿಗಳ ಬಂಧನ

    ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಬೈಕ್ ಬಾಕ್ಸ್‌ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಬೇತಮಂಗಲ ನ್ಯೂಟೌನ್ ನಿವಾಸಿ ರಮೇಶ್ ಎಂಬುವವರು ಕೆನರಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಬೈಕ್ ಬಾಕ್ಸ್​ನಲ್ಲಿ ಇರಿಸಿದ್ದರು. ಬೈಕ್ ನಿಲ್ಲಿಸಿ ರಮೇಶ್ ಅಂಗಡಿಯೊಂದಕ್ಕೆ ಹೋದ ಸಂದರ್ಭದಲ್ಲಿ ಹೊಂಚು ಹಾಕಿದ್ದ ಕಳ್ಳರು ಹಣವನ್ನು ದೋಚಿದ್ದಾರೆ. ಅಚ್ಚರಿಯ ವಿಷಯವೆಂದರೆ ಈ ಕೃತ್ಯ ಬೇತಮಂಗಲ ಪೊಲೀಸ್ ಠಾಣೆಯ ಸಮೀಪವೇ ನಡೆದಿದೆ. ಕಳ್ಳರು ಹಣದೊಂದಿಗೆ…

    Continue Reading

  • ಎಸ್‌ಐಟಿ ತನಿಖೆ ವೇಳೆ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ಬಾಕಿ: ಗ್ರಾಮಸ್ಥರ ಅಸಮಾಧಾನ
    ,

    ಎಸ್‌ಐಟಿ ತನಿಖೆ ವೇಳೆ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ಬಾಕಿ: ಗ್ರಾಮಸ್ಥರ ಅಸಮಾಧಾನ

    ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣ ಬಾರೀ ಸದ್ದು ಮಾಡಿತ್ತು, ರಾಜ್ಯ ಸರ್ಕಾರ ಎಸ್ಐಟಿ ರಚಿಸಿ, ಪ್ರಕರಣದ ತನಿಕೆಯನ್ನು ಎಸ್ಐಟಿ ತಂಡಕ್ಕೆ ವರ್ಗಾವಣೆ ಮಾಡಿತ್ತು. ನಂತರ ಎಸ್ಐಟಿ ತನಿಖೆ ಶುರುವಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು ಹದಿನೇಳು ಕಡೆಗಳಲ್ಲಿ ಉತ್ಖನನ ಕೂಡ ನಡೆಯಿತು. ಆದ್ರೆ ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡಿ ದುಡಿದವರ ದುಡ್ಡು ಪಾವತಿ ಮಾತ್ರ ಇನ್ನೂ ಬಾಕಿ ಇದೆ. 2025ರ ಜುಲೈ…

    Continue Reading

  • ನಕಲಿ ಪಾಸ್‌ಪೋರ್ಟ್ ಮೂಲಕ ಇಸ್ರೇಲ್‌ಗೆ ಹಾರಿದ ಮಹಿಳೆ: ಮಂಗಳೂರಿನಲ್ಲಿ ಅಕ್ರಮ ಜಾಲ ಬಯಲು
    , ,

    ನಕಲಿ ಪಾಸ್‌ಪೋರ್ಟ್ ಮೂಲಕ ಇಸ್ರೇಲ್‌ಗೆ ಹಾರಿದ ಮಹಿಳೆ: ಮಂಗಳೂರಿನಲ್ಲಿ ಅಕ್ರಮ ಜಾಲ ಬಯಲು

    ಮಂಗಳೂರು: ಬೇರೊಬ್ಬರ ಅಧಿಕೃತ ದಾಖಲೆಗಳನ್ನು ಬಳಸಿ ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿ, ಅಕ್ರಮವಾಗಿ ವಿದೇಶಕ್ಕೆ ತೆರಳಿದ ಪ್ರಕರಣವೊಂದನ್ನು ಮಂಗಳೂರು ನಗರದ ಸಿ.ಎಸ್.ಬಿ. ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಪ್ರೀತಾ ಡಿ ಸೋಜಾ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ನಡೆದಿದ್ದೇನು?: ಉಳ್ಳಾಲ ಬೈಲ್ ನಿವಾಸಿ ಯಶೋಧ ಕೇಶವ ಎಂಬುವವರ ಹೆಸರಿನಲ್ಲಿ ಅನ್ಯ ಮಹಿಳೆಯೊಬ್ಬರು ಪಾಸ್‌ಪೋರ್ಟ್ (ನಂ. ಸಿ4042172) ಹೊಂದಿ ವಿದೇಶಕ್ಕೆ ಪ್ರಯಾಣಿಸಿರುವ ಬಗ್ಗೆ ಪೊಲೀಸರಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಪಾಸ್‌ಪೋರ್ಟ್ ಅರ್ಜಿಯನ್ನು (BNX067061521924) ಕೂಲಂಕಷವಾಗಿ ಪರಿಶೀಲಿಸಿದಾಗ,…

    Continue Reading

  • ಕಬಡ್ಡಿ ಕ್ರೇಜ್‌ನಿಂದ ನಾಲ್ಕು ವರ್ಷಗಳ ಬಳಿಕ ಬಾಲಕನ ಸುಳಿವು
    ,

    ಕಬಡ್ಡಿ ಕ್ರೇಜ್‌ನಿಂದ ನಾಲ್ಕು ವರ್ಷಗಳ ಬಳಿಕ ಬಾಲಕನ ಸುಳಿವು

    ಮಂಡ್ಯ: ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ನಾಲ್ಕು ವರ್ಷದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಲೆಯ ಆವರಣದಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ತಂದೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದು, ಪೊಲೀಸರೂ ಈತನಿಗಾಗಿ ಶೋಧ ನಡೆಸುತ್ತಿದ್ದರು. ಅಂತಿಮವಾಗಿ ಆತನನ್ನು ಪತ್ತೆ ಮಾಡಲಾಗಿದ್ದು, ಹಿರೇಮರಳಿ ಗ್ರಾಮದ ಕಿಶೋರ್ ಎಂಬಾತನನ್ನು ಮರಳಿ ಕುಟುಂಬಸ್ಥರ ಮಡಿಲಿಗೆ ಸೇರಿಸಲಾಗಿದೆ. ವಿಶೇಷ ಅಂದರೆ ಬಾಲಕನಿಗಿದ್ದ ಕಬಡ್ಡಿ ಕ್ರೇಜೇ ಆತನ ಪತ್ತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದೆ. ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ 9ನೇ ತರಗತಿ ಓದುತ್ತಿದ್ದ ತಮ್ಮ…

    Continue Reading

  • ತಲಪಾಡಿ ಟೋಲ್ ಗೇಟ್ ನಲ್ಲಿ ಗಂಟೆ ಗಟ್ಟಲೆ ವಾಹನಗಳ ಸರಣಿ ಸಾಲು- ಅಧಿಕಾರಿಗಳ ನಿರ್ಲಕ್ಷ
    ,

    ತಲಪಾಡಿ ಟೋಲ್ ಗೇಟ್ ನಲ್ಲಿ ಗಂಟೆ ಗಟ್ಟಲೆ ವಾಹನಗಳ ಸರಣಿ ಸಾಲು- ಅಧಿಕಾರಿಗಳ ನಿರ್ಲಕ್ಷ

    ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಟೋಲ್ ಗೇಟ್ ಇದೀಗ ಟೋಲ್ ವಸೂಲಿ ಕೇಂದ್ರಕ್ಕಿಂತ ವಾಹನ ಸವಾರರಿಗೆ ಹಿಂಸೆ ನೀಡುವ ಸ್ಥಳವಾಗಿದೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ, ಟೋಲ್ ಪ್ಲಾಜಾದಲ್ಲಿ ಒಂದು ವಾಹನವು ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ವಾಹನವನ್ನು ಉಚಿತವಾಗಿ ಬಿಡಬೇಕಾಗಿದೆ. ಆದರೆ ತಲಪಾಡಿ ಟೋಲ್ ಗೇಟ್‌ನಲ್ಲಿ ಈ ನಿಯಮಗಳು ಕೇವಲ ಕಾಗದದಲ್ಲೇ ಉಳಿದಿವೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪ್ರಶ್ನೆ ಏನೆಂದರೆ —ವಾಹನಗಳು…

    Continue Reading

  • ಸಾಧನಾ ಶೆಟ್ಟಿ ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಶಾಕಿಂಗ್ ತಿರುವು – ಪತಿಯೇ ಸುಳ್ಳು ಆರೋಪ ಮಾಡಿದನೆಂದ ಪತ್ನಿ
    ,

    ಸಾಧನಾ ಶೆಟ್ಟಿ ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಶಾಕಿಂಗ್ ತಿರುವು – ಪತಿಯೇ ಸುಳ್ಳು ಆರೋಪ ಮಾಡಿದನೆಂದ ಪತ್ನಿ

    ಬೆಂಗಳೂರು: ಕನ್ನಡದ ಪ್ರಭಾವಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ 1.5 ಕೋಟಿ ರೂ. ಬ್ಲ್ಯಾಕ್‌ಮೇಲ್ಆರೋಪ ಕೇಳಿಬಂದಿತ್ತು. ಆದರೆ ಪ್ರಕರಣವು ಈಗ ಸಿನಿಮಾ ಶೈಲಿಯ ತಿರುವು ಪಡೆದುಕೊಂಡಿದೆ. ತನ್ನ ಪತಿ ಕಾರ್ತಿಕ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸ್ವತಃ ಆತನ ಪತ್ನಿ ಹರ್ಷಿತಾ ಅವರೇ ಪೊಲೀಸರಿಗೆ ಪತ್ರ ಬರೆಯುವ ಮೂಲಕ ಉದ್ಯಮಿಯ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ. ನನ್ನ ಪತಿ ಸುಳ್ಳು ಆರೋಪ ಮಾಡಿದ್ದಾರೆಂದ ಪತ್ನಿ ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕನೆಂದು ಹೇಳಿಕೊಂಡಿರುವ…

    Continue Reading

  • ಮುಲ್ಕಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಿದ್ಯಾರ್ಥಿನಿ ಸೇರಿ ಹೈಡ್ರೊವಿಡ ಗಾಂಜಾ ಜಪ್ತಿ
    ,

    ಮುಲ್ಕಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಿದ್ಯಾರ್ಥಿನಿ ಸೇರಿ ಹೈಡ್ರೊವಿಡ ಗಾಂಜಾ ಜಪ್ತಿ

    ಮಂಗಳೂರು: ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿತೆಯನ್ನು ಮಂಗಳೂರು ನಗರದ ಮುಲ್ಕಿ ಪೊಲೀಸರು ಬಂಧಿಸಿ 35,00,000 ರೂ. ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೊವಿಡ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಶಿವಮೋಗ್ಗದ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ಸುಹಾನ (21) ಬಂಧಿತ ಆರೋಪಿತೆ. ಬಂಧಿತೆ ಕುಂದಾಪುರ ಕಾಲೇಜೊಂದರ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ.ಮಂಗಳವಾರ ಮುಲ್ಕಿ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಹೈಡ್ರೊವಿಡ ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಸಾಗಾಟ…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed